Siddaramaiahಪರಿಶೀಲಿಸಿದ ಖಾತೆ

@siddaramaiah

ಕನ್ನಡಿಗ | Believer in equity & social justice | Family man | Chief Minister of Karnataka (2013 - 2018)

ಜುಲೈ 2017 ಸಮಯದಲ್ಲಿ ಸೇರಿದ್ದಾರೆ

ಟ್ವೀಟ್‌ಗಳು

ನೀವು @siddaramaiah ಅವರನ್ನು ತಡೆಹಿಡಿದಿರುವಿರಿ

ಈ ಟ್ವೀಟ್‌ಗಳನ್ನು ವೀಕ್ಷಿಸಲು ನೀವು ಖಚಿತವಾಗಿ ಬಯಸುವಿರಾ? ಟ್ವೀಟ್ ವೀಕ್ಷಣೆಯು @siddaramaiah ಅವರ ತಡೆತೆರವುಗೊಳಿಸುವುದಿಲ್ಲ

  1. 2 ಗಂಟೆಗಳ ಹಿಂದೆ

    ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹರೀಶ್ ಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರೊಂದಿಗೆ ಪಕ್ಷಕ್ಕೆ ಬರಮಾಡಿಕೊಂಡೆನು.

    ರದ್ದುಗೊಳಿಸು
  2. 5 ಗಂಟೆಗಳ ಹಿಂದೆ

    ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ನಾಡಿನ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಎಲ್ಲರಿಗೂ ಅಭಿನಂದನೆಗಳು. ಉಜ್ವಲ ಭವಿಷ್ಯ ತಮ್ಮದಾಗಲಿ‌ ಎಂದು ಹಾರೈಸುತ್ತೇನೆ.

    ರದ್ದುಗೊಳಿಸು
  3. 6 ಗಂಟೆಗಳ ಹಿಂದೆ

    ಸಮಾಜ ಒಡೆಯುವ ಶಕ್ತಿಗಳನ್ನು ತಿರಸ್ಕರಿಸಿ ದೇಶ ಕಟ್ಟುವ ಕೈಗಳನ್ನು ಬೆಂಬಲಿಸುವ ಮೂಲಕ ಹೊಸ ಚಿಂತನೆಯೊಂದಿಗೆ ಹೊಸ ವರ್ಷ ಯುಗಾದಿಯನ್ನು ಬರಮಾಡಿಕೊಳ್ಳೋಣ. ಪರಿವರ್ತನೆಯನ್ನು ಸಾರುವ ಶುಭ ದಿನದಂದು ಧನಾತ್ಮಕ ಪರಿವರ್ತನೆಗಾಗಿ ಒಂದಾಗೋಣ. ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

    ರದ್ದುಗೊಳಿಸು
  4. 20 ಗಂಟೆಗಳ ಹಿಂದೆ

    ಸದಾನಂದಗೌಡ ಅವರು ಸಿಎಂ ಆಗಿದ್ದ ವೇಳೆ ಬೆಂಗಳೂರಿಗೆ ಏನ್ ಮಾಡಿದ್ದಾರೆ ಎಂದು ಹೇಳಲಿ. ನರೇಂದ್ರ ಮೋದಿ ಅವರು ಉದ್ಯಮಿಗಳ ರೂ.3.5 ಲಕ್ಷ ಕೋಟಿ ಸಾಲಮನ್ನಾ ಮಾಡುವಾಗ ಸದಾನಂದ ಗೌಡರಿಗೆ ರಾಜ್ಯದ ರೈತರ ನೆನಪಾಗಲಿಲ್ಲವೇ? ಸದಾನಂದಗೌಡರನ್ನ ಬೆಂಗಳೂರಿಗರು ಸುಳ್ಯಗೆ ಕಳುಹಿಸದಿದ್ದರೆ, ಬೆಂಗಳೂರಿನ ಯುವಕರು ಮನೆಯಲ್ಲೇ ಉಳಿಯಬೇಕಾಗುತ್ತದೆ.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  5. 20 ಗಂಟೆಗಳ ಹಿಂದೆ

    ಸದಾನಂದಗೌಡರು ಆನಂದದಲ್ಲಿದ್ದಾರೆ.‌ ಆದರೆ ಅವರು ತಮ್ಮ ಮತದಾರರನ್ನ ಆನಂದದಲ್ಲಿ ಇಟ್ಟಿದ್ದಾರಾ? ರೈಲ್ವೆ ಖಾತೆಯಿಂದ ನಿಮ್ಮನ್ನ ಯಾಕೆ ಕೆಳಗೆ ಇಳಿಸಿದ್ರು ಅಂತ ನಾನೊಮ್ಮೆ ಅವರನ್ನು ಕೇಳಿದ್ದೆ. ನಾನು ಕೇಳಿದಾಗಲೂ ಸದಾನಂದಗೌಡ್ರು ಸುಮ್ನೆ ನಕ್ಕಿದ್ದರು. ಸದಾನಂದಗೌಡರ ಸಾಮರ್ಥ್ಯವೇನು ಎಂಬುದು ಆಗಲೇ ತಿಳಿಯಿತು.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  6. 20 ಗಂಟೆಗಳ ಹಿಂದೆ

    ಬಿಜೆಪಿ ನಾಯಕರು ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಾರೆ.‌ ಮೋದಿ ಮುಖವಾಡ ಹಾಕಿದ ವ್ಯಕ್ತಿಯನ್ನು ಜೊತೆಗಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುವ ಸದಾನಂದ ಗೌಡರಿಗೆ ಸ್ವಂತ ಗುರುತಿಲ್ಲವೆ? ಸ್ವಂತ ಶಕ್ತಿಯಿಂದ ಮತವನ್ನೇ ಕೇಳಲಾಗದವರು, ಸಂಸದರಾಗಿ ಏನು ಸಾಧನೆ ಮಾಡಬಲ್ಲರು?

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  7. 20 ಗಂಟೆಗಳ ಹಿಂದೆ

    ಯಡಿಯೂರಪ್ಪ ಅವರಿಗೆ ಒಂದು ವೇಳೆ ಆಪರೇಷನ್ ಆಗಿ ರಕ್ತ ಬೇಕು ಅಂದ್ರೆ ಹಿಂದೂ ರಕ್ತನೇ ಕೊಡಿ ಎಂದು ಕೇಳುತ್ತಾರೋ? ಹಿಂದೂವಿನ ರಕ್ತ ಸಿಗುವವರೆಗೆ ರಕ್ತವನ್ನೇ ಪಡೆಯುವುದಿಲ್ಲವೇ? ಸಾವು, ನೋವು, ಹಸಿವಿಗೆ ಧರ್ಮವಿದೆಯೇ? ರಾಜಕೀಯದಲ್ಲಿ ಧರ್ಮಪಾಲನೆ ಮಾಡಲಿ, ಧರ್ಮದಲ್ಲಿ ರಾಜಕಾರಣ ಎಂದಿಗೂ ಸಲ್ಲದು.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  8. 22 ಗಂಟೆಗಳ ಹಿಂದೆ

    ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಕೃಷ್ಣ ಬೈರೇಗೌಡರಿಗೆ ಮತ ನೀಡುವಂತೆ ಕೋರಿದೆ. ನಾಡಿನ ಪರವಾದ ಧ್ವನಿ‌ ಸಂಸತ್ತಿನಲ್ಲಿ ಮೊಳಗಬೇಕು ಎಂದಾದರೆ ಕೃಷ್ಣಬೈರೇಗೌಡರಂತಹ ನಾಯಕರಿಗೆ ಜನತೆ ಮತ ನೀಡಿ, ಗೆಲ್ಲಿಸಬೇಕು.

    ರದ್ದುಗೊಳಿಸು
  9. ಏಪ್ರಿ 5

    ಕೆ.ಆರ್.ಪುರಂ ವಿಧಾನಸಭೆ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ, ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡರ ಪರ ಮತ ಯಾಚಿಸಿದೆ.

    ರದ್ದುಗೊಳಿಸು
  10. ಅವರು ಮರುಟ್ವೀಟಿಸಿದ್ದಾರೆ
    ಏಪ್ರಿ 5

    Campagin Trail Schedule: Former PM Shri HD DeveGowda and Former CM Shri Siddaramaiah will be campaigning in Bengaluru North today.

    , , ಮತ್ತು 2 ಇತರರು
    ರದ್ದುಗೊಳಿಸು
  11. ಏಪ್ರಿ 5

    ದೇಶದ ಶೋಷಿತರ ವಿಮೋಚಕರಾಗಿ, ಮುತ್ಸದ್ದಿ ರಾಜಕಾರಣಿಯಾಗಿ, ಅಪ್ರತಿಮ ದೇಶಭಕ್ತರಾಗಿ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ನಮಗೆಲ್ಲ ಆದರ್ಶಪ್ರಾಯರು. ಅವರ ಶ್ರಮ-ಸಾಧನೆಯ ಫಲ‌ ಉಣ್ಣುತ್ತಿರುವ ನಾವು ಜಗಜೀವನ್ ರಾಮ್ ಅವರನ್ನು ಅವರ ಹುಟ್ಟುಹಬ್ಬದ ದಿನವಾದ ಇಂದು ಗೌರವಪೂರ್ವಕವಾಗಿ ನೆನೆದು ನಮಿಸೋಣ.

    ರದ್ದುಗೊಳಿಸು
  12. ಏಪ್ರಿ 4

    ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ್ ಅವರು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಆಯೋಜಿಸಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದೆ. ಬಿಜೆಪಿಯ ಮೇಲೆ ದೇಶದ ಜನರು ಇಟ್ಟಿದ್ದ ಭರವಸೆ ಹುಸಿಯಾಗಿದೆ. ಜನ ಬದಲಾವಣೆ ಬಯಸಿದ್ದಾರೆ, ಈ ಬಾರಿ ಕೊಪ್ಪಳದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ.

    ರದ್ದುಗೊಳಿಸು
  13. ಏಪ್ರಿ 4

    55 ವರ್ಷಗಳ‌ ಕಾಂಗ್ರೆಸ್ ಸಾಧನೆಯನ್ನು ಪ್ರಶ್ನಿಸುವ ನರೇಂದ್ರ ಮೋದಿಯವರ ಸಾಧನೆಯೆಂದರೆ ಕಾಂಗ್ರೆಸ್ ಸ್ಥಾಪಿಸಿದ ಒಂದೊಂದೆ ಸಂಸ್ಥೆಗಳನ್ನು ಅಧೋಗತಿಗೆ ತಳ್ಳುತ್ತಿರುವುದು. ಈ ಬಾರಿಯ ಚುನಾವಣೆಯಲ್ಲಿ ಜನತೆ ಮೋದಿಯವರನ್ನು ಮನೆಗೆ ಕಳುಹಿಸದಿದ್ದರೆ ಕೇಂದ್ರ ಸರ್ಕಾರಿ ನೌಕರರೆಲ್ಲ ಮನೆಗೆ ಹೋಗಬೇಕಾಬಹುದು. ನಿಮ್ಮ ಮತ ನಿಮ್ಮ ಭವಿಷ್ಯ ನಿರ್ಧರಿಸಲಿದೆ.

    ರದ್ದುಗೊಳಿಸು
  14. ಏಪ್ರಿ 3

    ಲೋಕಸಭೆ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಬಾದಾಮಿಯಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಮತದಾರರು ನನ್ನನ್ನು ಗೆಲ್ಲಿಸಿದ್ದರು, ಈ ಚುನಾವಣೆಯಲ್ಲಿಯೂ ಮೈತ್ರಿ ಕೂಟದ ಅಭ್ಯರ್ಥಿಗೆ ಮತ ನೀಡುತ್ತಾರೆಂಬ ವಿಶ್ವಾಸವಿದೆ.

    ರದ್ದುಗೊಳಿಸು
  15. ಏಪ್ರಿ 3

    ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಈಶ್ವರಪ್ಪ ಇವರೆಲ್ಲ ಹೆಸರಿಗೆ ಮಾತ್ರ ಚೌಕಿದಾರರು. ಯಾರು ದೇಶದ ಮೇಲಿನ ಅಭಿಮಾನದಿಂದ ಮೋದಿಯನ್ನು ವಿರೋಧಿಸುತ್ತಾರೋ, ಯಾರು ಪ್ರಜಾಪ್ರಭುತ್ವದ ಉಳಿವಿಗಾಗಿ ಮೋದಿಯನ್ನು ವಿರೋಧಿಸುತ್ತಾರೋ ಅವರು ನಿಜವಾದ ಚೌಕಿದಾರರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವವರು ನಿಜವಾದ ದೇಶದ್ರೋಹಿಗಳು.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  16. ಏಪ್ರಿ 3

    ಬಿಜೆಪಿಗೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು, ಶೋಷಿತ ವರ್ಗದ ಜನರನ್ನು ಕಂಡರೆ ಆಗಲ್ಲ. ಇವರೆಲ್ಲರನ್ನೂ ಅಭಿವೃದ್ಧಿಯಿಂದ ಹೊರಗಿಟ್ಟು ದೇಶ ಉದ್ಧಾರ ಮಾಡುತ್ತೇವೆ ಎನ್ನುತ್ತಾರೆ. ಬಿಜೆಪಿಯವರ ನಿಜವಾದ ವಿಕಾಸ ಬಡವರನ್ನು ತಲುಪದೆ ಅಂಬಾನಿಯಿಂದ ಶುರುವಾಗಿ ಅದಾನಿಗೆ ಕೊನೆಯಾಗುತ್ತಿದೆ.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  17. ಏಪ್ರಿ 3

    ಬಿಜೆಪಿ 28 ಲೋಕಸಭಾ ಕ್ಷೇತ್ರಗಳಲ್ಲಿ ಕೇವಲ ಒಂದೇ ಒಂದು ಸ್ಥಾನವನ್ನು ಸಹ ಹಿಂದುಳಿದ ವರ್ಗದವರಿಗೆ ನೀಡಿಲ್ಲ. ಇದರಿಂದ ಆ ವರ್ಗದ ಜನರಿಗೆ ಬಿಜೆಪಿ ಅನ್ಯಾಯ ಮಾಡಿದ ಹಾಗಲ್ಲವೇ? ಚುನಾವಣೆ ಸಮಯದಲ್ಲಿ ಜಾತಿ ರಾಜಕಾರಣ ಮಾಡುವ ಈಶ್ವರಪ್ಪ ನಿಜವಾಗಿ ಹಿಂದುಳಿದ ಜಾತಿಗೆ ಸೇರಿದವರಾಗಿದ್ದರೆ ಬಿಜೆಪಿಗೆ ರಾಜೀನಾಮೆ ನೀಡಲಿ.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  18. ಏಪ್ರಿ 3

    ಈಶ್ವರಪ್ಪನವರು ಮುಸ್ಲಿಮರ ಮತ ಬಿಜೆಪಿಗೆ ಬೇಡವೇ ಬೇಡ ಎನ್ನುವ ಜೊತೆಗೆ, ಮುಸ್ಲಿಮರಿಗೆ ಬಿಜೆಪಿಯ ಟಿಕೆಟ್ ಬೇಕಾದರೆ ತಮ್ಮ ಕಚೇರಿಯ ಕಸ ಗುಡಿಸಲಿ ಎಂದು ಇಡೀ ಸಮುದಾಯವನ್ನೇ ಅವಮಾನಿಸಿದ್ದಾರೆ. ತೋರುಗಾಣಿಕೆಗೆ ಸರ್ವ ಧರ್ಮವನ್ನು ಗೌರವಿಸುವ ಬಿಜೆಪಿಯ ಮುಖವಾಡದ ಹಿಂದೆ ಅಲ್ಪಸಂಖ್ಯಾತ ವಿರೋಧಿ ಕರಾಳ ಮುಖವಿದೆ.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  19. ಏಪ್ರಿ 3

    ಗೋದ್ರಾ ಹತ್ಯಾಕಾಂಡದಲ್ಲಿನ ಸಾವಿರಾರು ಅಮಾಯಕರ ಸಾವಿಗೆ ಅಂದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಕಾರಣರಲ್ಲವೇ? ನಾನು ಮುಖ್ಯಮಂತ್ರಿಯಾಗಿ ಧರ್ಮ-ಜಾತಿಗಳ ಬೇಧವಿಲ್ಲದೆ ಅನ್ನಭಾಗ್ಯ, ವಿದ್ಯಾಸಿರಿ, ಮೈತ್ರಿ, ಮನಸ್ವಿನಿ, ಕೃಷಿಭಾಗ್ಯ, ಸಾಲಮನ್ನಾ, ಶೂಭಾಗ್ಯ ಯೋಜನೆ ನೀಡಿದ್ದೆ. ಹಾಗಾದರೆ ನಿಜವಾದ 'ಸಬ್ ಕ ಸಾಥ್ ಸಬ್ ಕ ವಿಕಾಸ್' ಯಾರದ್ದು?

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  20. ಏಪ್ರಿ 3

    ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಪಾಕಿಸ್ಥಾನದ ಮೇಲೆ ಯುದ್ಧ ಮಾಡಿ 1 ಲಕ್ಷ ಪಾಕ್ ಸೈನಿಕರನ್ನು ಸೆರೆಹಿಡಿದು, ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದರು. ಬಿಜೆಪಿಯವರೇ ಆದ ಅಟಲ್ ಬಿಹಾರ್ ವಾಜಪೇಯಿಯವರು ಇಂದಿರಾ ಗಾಂಧಿಯವರನ್ನು ದುರ್ಗೆ ಎಂದು ಹೊಗಳಿದ್ದರು. ಆದರೆ ಇದನ್ನು ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಕೆ ಮಾಡಿಕೊಂಡಿರಲಿಲ್ಲ.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.

    ಇದನ್ನೂ ಸಹ ನೀವು ಇಷ್ಟಪಡಬಹುದು

    ·