ಜೀವನದಲ್ಲಿ ಕೆಲ ಸ್ನೇಹಿತರನ್ನು ಎಂದೂ ಮರೆಯಲಾಗುವುದಿಲ್ಲ. ಕಾರಣ ಅವರು ನಮ್ಮಿಂದ ಸಾಲ ಪಡೆದಿರುತ್ತಾರೆ.
ಬ್ರೇಕಿಂಗ್ ನ್ಯೂಸ್
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ! ( 0 )
10/11/2014
ಅನೇಕರಲ್ಲಿ ಒಂದು ಗುಣವಿದೆ. ಅದೇನೆಂದರೆ ತಮ್ಮ ಎಲ್ಲ ಗೋಳು, ಸಂಕಟಗಳನ್ನು ಸ್ನೇಹಿತರು, ಬಂಧು-ಬಾಂಧವರು ಹಾಗೂ ಸಹೋದ್ಯೋಗಿಗಳ ಮುಂದೆ ಹರಡಿಕೊಳ್ಳುತ್ತಾರೆ, ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊಳ್ಳುವ ಮೂಲಕ ತಾವು ಹಗುರಾಗಿದ್ದೇವೆಂದು ಭಾವಿಸುತ್ತಾರೆ. ನಮ್ಮ ಕಷ್ಟಗಳನ್ನು ಬೇರೆಯವರ ಮುಂದೆ ಹೇಳಿಕೊಂಡರೆ, ಹಂಚಿಕೊಂಡರೆ ಅದರ ಭಾರ ಹೇಗೆ ಕಡಿಮೆಯಾಗುತ್ತದೆ? ನಮ್ಮ ತೊಂದರೆಗಳನ್ನು ನಮಗೆ ಬೇಕಾದವರ ಮುಂದೆ ಹೇಳಿಕೊಳ್ಳುವುದರಿಂದ ಸಲಹೆ, ಮಾರ್ಗದರ್ಶನದ ರೂಪದಲ್ಲಿ ಒಂದಷ್ಟು ಸಹಾಯ ಸಿಗಬಹುದು. ಮನಸ್ಸಿನಲ್ಲಿ ಮಡುಗಟ್ಟಿದ ಭಾವನೆಗಳನ್ನು ಹರಿಯಬಿಟ್ಟಾಗ, ಒಂದಷ್ಟು ರಿಲೀಫ್ ಸಿಗಬಹುದು. ನಮ್ಮ ಕಷ್ಟಗಳಿಗೆ ಸ್ನೇಹಿತರು ಪರಿಹಾರೋಪಾಯ ಸೂಚಿಸಬಹುದು. […]
ನೂರೆಂಟು ಮಾತು
ದೇವರ ಕೆಲಸದಲ್ಲಿ ದೈವತ್ವ ಕಂಡ ತ್ರಿಮೂರ್ತಿಗಳು! ( 0 )
06/11/2014
ಕಳೆದ ವಾರ ನಿಧನರಾದ ಮೂವರು ಪರಿಚಿತರು ಹಾಗೂ ಆತ್ಮೀಯರನ್ನು ಸ್ಮರಿಸಿಕೊಳ್ಳಲೇಬೇಕು. ಮೂವರೂ ಹೆಚ್ಚು -ಕಮ್ಮಿ ಒಂದೇ ಉದ್ದೇಶಕ್ಕಾಗಿ ಜೀವ ಸವೆಸಿದವರು. ಅವರ ಕಾಯಕ ಚಿಂತನೆ ಒಂದೇ ಆಗಿತ್ತು. ವೈಯಕ್ತಿಕವನ್ನು ಮೀರಿ ಸಾರ್ವಜನಿಕವನ್ನು ಜೀವನದಲ್ಲಿ ಅಳವಡಿಸಿಕೊಂಡವರು. ಹಾಗಂತ ಎಂದೂ ಪ್ರಚಾರ ಬಯಸಿದವರಲ್ಲ. ಎಂದೂ ಪ್ರಶಸ್ತಿ, ಶಿಫಾರಸುಗಳಿಂದ ದೂರ ಉಳಿದವರು. ತಮ್ಮ ನೆಲೆಯಲ್ಲಿಯೇ ಬದುಕನ್ನು ಕಟ್ಟಿಕೊಂಡು ಅದನ್ನು ಸಮಾಜಮುಖಿಯಾಗಿ ಮಾಡುವತ್ತ ಹಂಬಲಿಸಿದವರು. ಅವರ ಸಾಧನೆ ಗುರುತಿಸಿ ಯಾರೂ ಅವರನ್ನು ಸನ್ಮಾನಿಸದೇ ಇದ್ದುದು ದುರ್ದೈವ. ಈ ಮೂವರ ಜತೆ ಮಾತಾಡುವಾಗ, ನನ್ನಲ್ಲೊಂದು […]
ಸುದ್ದಿಮನೆ ಕತೆ
20 ನಿಮಿಷ 20 ಸುದ್ದಿ ( 4 )
24/11/2013
ಭಾನುವಾರ ಬೆಲಗಾಗುವುದು ನಿಧಾನ. ಯಾವುದೇ ಗಲಿಬಿಲಿ ಇಲ್ಲ. ಕುಟುಂಬದ ಜತೆ ಕಾಲ ಕಳೆಯಲು ಸಾಕಷ್ಟು ವ್ಯವಧಾನ, ಒಂದು ರೀತಿಯ ಜಾಲಿ ಮೂಡ್ ಬೇಕು. ಮನೆ ಮಂದಿ ಜತೆ ಕಲೆತು ಸಿನಿಮಾಕ್ಕೋ, ಶಾಪಿಂಗಿಗೋ, ಮಧ್ಯಾಹ್ನದ ಊಟಕ್ಕೆಂದು ಹೊಟೆಲ್ಲಿಗೋ ಹೋಗುವುದು ಸಹಜ. ಈ ಎಲ್ಲ ರಜಾಕಾಲದ ನಡುವೆ ದಿನನಿತ್ಯದ ಸುದ್ದಿಯ ಓದು ಕಳೆದುಹೋತಬಹುದು. ಅತ್ರಿಕೆ ಹರವಿಕೊಂಡು ಸುದ್ದಿಯನ್ನು ಹೆಕ್ಕಿ ತಗೆದು ಓದುವಷ್ಟು ಪುರುಸೊತ್ತು ಇರುವುದಿಲ್ಲ. ಚಿಂತೆ ಬೇಡ. ನಿಮ್ಮ ಶ್ರಮ ಕಡಿಮೆ ಮಾಡಲು, ಕೇವಲ ಇಪ್ಪತ್ತು ನಿಮಿಷದಲ್ಲಿ ಇಪ್ಪತ್ತು ಪ್ರಮುಖ […]
ನಂಗೆ ಇಷ್ಟಾನೋ
ಒಂದು ಸೋಲು, ಸೋಲಲ್ಲ ( 0 )
08/11/2014
ಜೀವನದಲ್ಲಿ ಪದೇ ಪದೆ ಫೇಲ್ ಆದವರು ಸೋಲಿನ ರುಚಿ, ಕಹಿ, ಸಿಹಿ ಎಲ್ಲವನ್ನೂ ಅರಿತಿರುತ್ತಾರೆ. ಸೋಲನ್ನು ದಕ್ಕಿಸಿಕೊಂಡು, ಅದರ ಅವಮಾನವನ್ನು ಸಹಿಸಿಕೊಂಡು ಪುನಃ ಮೊದಲಿನಂತಾಗಲು ಪ್ರಯತ್ನಿಸುತ್ತಾರೆ. ಆದರೆ ಜೀವನದಲ್ಲಿ ಯಶಸ್ಸನ್ನು ಕಂಡವರು, ಸೋಲನ್ನೇ ಕಾಣದವರು ಏಕಾಏಕಿ ಫೇಲ್ ಆದಾಗ ಚಡಪಡಿಸುತ್ತಾರಲ್ಲ, ಒಳಗೊಳಗೇ ಬೇಯುತ್ತಾರಲ್ಲ, ಅದನ್ನು ನೋಡಲಾಗುವುದಿಲ್ಲ. ಯಶಸ್ಸು ಅವರಲ್ಲೊಂದು ದಾರ್ಷ್ಟ್ಯವನ್ನು ರೂಪಿಸಿರುತ್ತದೆ. ಯಶಸ್ಸಿನ ಗುಂಗಿನಲ್ಲಿ ಅವರು ಮೈಮರೆತಿರುತ್ತಾರೆ. ಜೀವನ ಸದಾ ಹೀಗೇ ಇರುತ್ತದೆಂದು ಭಾವಿಸಿರುತ್ತಾರೆ. ಆದರೆ ಹಠಾತ್ತನೆ ಸೋಲು ಎದುರಾದರೆ ಅವರಿಗೆ ಅದನ್ನು ಹೇಗೆ ಸ್ವೀಕರಿಸಬೇಕೆಂಬುದೇ ಗೊತ್ತಾಗದೇ […]
ಜನಗಳ ಮನ
ಹುಡುಗ-ಹುಡುಗಿಯರಲ್ಲಿ ಲವ್ ಹುಟ್ಟಲು ಔಷಧಿ ಇದೆಯೇ? ( 0 )
13/02/2014
ಕೇಳ್ರಪ್ಪೋ ಕೇಳಿ * ತಲವಾಟ ಮಂಜುನಾಥ, ಸಾಗರ, 9480931611 ಹುಡುಗ-ಹುಡುಗಿಯರಲ್ಲಿ ಲವ್ ಹುಟ್ಟಲು ಔಷಧಿ ಇದೆಯೇ? ಲವ್ ಹುಟ್ಟೋದಕ್ಕೇ ಔಷಧಿ ಬೇಕು ಅಂದ್ರೆ ಮುಂದಿಂದೆಲ್ಲ ಹೇಗೆ ಮಾರಾಯಾ? * ಐಗೂರು ರವಿಪ್ರಿಯ, ಕೊಡಗು, 9483111096 ನಮ್ಮ ರಾಜ್ಯ ಸರ್ಕಾರದಿಂದ ಒಂದು ರುಪಾಯಿ ಕೆಜಿ ಅಕ್ಕಿ ಪಡೆದು, ಕೇಂದ್ರ ಸರ್ಕಾರ ನೀಡುವ ಸಾವಿರಾರು ರುಪಾಯಿಯ ‘ಗ್ಯಾಸ್’ನಲ್ಲಿ ಅಡುಗೆ ಮಾಡುವುದು ಹೇಗೆ? ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಇಸ್ಕೊಳ್ಳೋದು ಅಂದ್ರೆ ಇದೇ ನೋಡಿ. * ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088 ಸಾಹಿತಿಗಳೆಲ್ಲ […]
ತಪ್ಪಾಯ್ತು ತಿದ್ಕೋತೀವಿ
ವ್ಯಂಗ್ಯಚಿತ್ರವು ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ ( 0 )
13/01/2014
ತಪ್ಪಾಯ್ತು ತಿದ್ಕೋತೀವಿ ಈ ಅಂಕಣದಲ್ಲಿ ಪ್ರಕಟವಾದ ಹರಳಹಳ್ಳಿ ಪುಟ್ಟರಾಜು ಅವರ ಪತ್ರಕ್ಕೆ ಓದುಗರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕರು ಪ್ರತಾಪ್ ಸಿಂಹ ಹಾಗೂ ಪತ್ರಿಕೆಯ ನಿಲುವು ಮತ್ತು ವಿನ್ಯಾಸವನ್ನು ಸಮರ್ಥಿಸಿದ್ದಾರೆ. ಓದುಗರ ಪ್ರೀತಿ, ಅಭಿಮಾನಕ್ಕೆ ನಾವು ಋಣಿ. ಅದರಲ್ಲಿ ಆಯ್ದ ಪತ್ರವನ್ನು ಮಾತ್ರ ಇಲ್ಲಿ ನೀಡುತ್ತಿದ್ದೇನೆ. ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- ‘ಮಿತ್ರ ಹರಳಹಳ್ಳಿ ಪುಟ್ಟರಾಜು ಅವರು ಚೆನ್ನಾಗಿ ಬರೆಯುತ್ತಾರೆ. ಸಂತೋಷ. ಆದರೆ ಬರೆದುದೆಲ್ಲವೂ ಚೆನ್ನವೆಂದು ಹೇಗೆ ಒಪ್ಪೋಣ. ನಮ್ಮ ಇಂದಿನ ಪ್ರಧಾನಿಯವರ ಮುಖವನ್ನು […]
ಟ್ವಿಭಾಷಿತ
( 3 )
28/01/2013
* ಬಿಜೆಪಿ ಉಗ್ರವಾದಿಗಳನ್ನು ಸೃಷ್ಟಿಸುತ್ತಿದೆ ಎನ್ನುವುದಾದರೆ,ಆಡ್ವಾಣಿಯವರನ್ನು ವೇದಿಕೆಯ ಮೇಲೆಕೆ ಬಿಟ್ಟುಕೊಳ್ಳುತ್ತಾರೆ? ಅಲ್ಲದೆ ಉಗ್ರವಾದಿಗಳ ಗುರುತಾದ ‘ಪದ್ಮ’ ಪ್ರಶಸ್ತಿಗಳನ್ನೇಕೆ ಇಂದಿಗೂ ಕೊಡಲಾಗುತ್ತಿದೆ?! – ಆರ್. ವೈದ್ಯ * ಎಲ್ಲಾ ರಾಜಕಾರಣಿಗಳೂ ಭ್ರಷ್ಟರಲ್ಲ, ಎಲ್ಲಾ ಸರ್ಕಾರಿ ಅಧಿಕಾರಿಗಳೂ ಕೆಟ್ಟವರಲ್ಲ ಹಾಗೆಯೇ ಪ್ರತಿಯೊಬ್ಬ ಗಂಡಸೂ ಅತ್ಯಾಚಾರಿಯಲ್ಲ. ಭಾರತದಲ್ಲಿ ಇಂದಿಗೂ ಒಳ್ಳೆಯತನ ಉಳಿದಿದೆ. ಮಾನವೀಯತೆಯ ಮೇಲೆ ನಂಬಿಕೆಯಿರಲಿ. – ಚೇತನ್ ಭಗತ್ * ನಾನು ಹೇಳುವುದನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಆದರೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಕವಾಯಿತು ಮಾಡುವ, ಆದರೆ ತನ್ನ ಸೈನಿಕನ ತಲೆಯನ್ನೇ ಹುಡುಕಿ […]
