Twitter | Αναζήτηση | |
Siddaramaiah
ಕನ್ನಡಿಗ | Believer in equity & social justice | Family man | Chief Minister of Karnataka (2013 - 2018)
1.126
Tweet
72
Ακολουθείτε
165.862
Ακόλουθοι
Tweet
Siddaramaiah 9 ώρ.
ಬಾದಾಮಿಯ ಕಾಳಿದಾಸ ವಿದ್ಯಾಸಂಸ್ಥೆ ಆವರಣದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಕಾರ್ಯಕರ್ತರ‌ ಸಭೆ ಆಯೋಜಿಸಲಾಗಿದೆ. ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
Reply Retweet Σήμανση "Μου αρέσει"
Siddaramaiah 10 ώρ.
ಬಾದಾಮಿ‌ ಕ್ಷೇತ್ರದ ಜನತೆ ನನ್ನ ಮೇಲೆ ತೋರಿದ ಪ್ರೀತಿ-ವಿಶ್ವಾಸ ಎಂದೆಂದೂ ಮರೆಯಲಾರೆ. ನನ್ನ ರಾಜಕೀಯ ಬದುಕಿನ‌ ನಿರ್ಣಾಯಕ‌ ಚುನಾವಣೆಯಲ್ಲಿ ಕೈ ಹಿಡಿದ ಮತದಾರರಿಗೆ‌‌‌ ಕೃತಜ್ಞತೆ‌ ಸಲ್ಲಿಸುವ ನನ್ನ‌ ಯಾತ್ರೆ‌ ಯನ್ನು‌ ಇಂದು ಕೂಡಾ‌ ಮುಂದುವರಿಸಿದ್ದೇನೆ.
Reply Retweet Σήμανση "Μου αρέσει"
Siddaramaiah 10 ώρ.
ಬಾದಾಮಿ ವಿಧಾನಸಭೆ ಕ್ಷೇತ್ರದ ಯರಗುಪ್ಪಿ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ನೀಡಿದ ಸ್ವಾಗತ‌ ನೋಡಿ‌ ಮನತುಂಬಿಬಂತು.
Reply Retweet Σήμανση "Μου αρέσει"
Siddaramaiah 9 Ιουν
ತಮ್ಮ ಕುಟುಂಬಕ್ಕೆ ಸ್ವಂತ ಮನೆ ಇಲ್ಲ. ವಸತಿ ಯೋಜನೆಯಲ್ಲಿ‌ ಮನೆ ಮಂಜೂರು ಮಾಡಿಸಿಕೊಡಿ ಎಂದು ಮಹಿಳೆಯೊಬ್ಬರು ಮನವಿ ನೀಡಿದರು, ತಕ್ಷಣ ಮನೆ ಮಂಜೂರು ಮಾಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
Reply Retweet Σήμανση "Μου αρέσει"
Siddaramaiah 9 Ιουν
ಬಾದಾಮಿ ವಿಧಾನಸಭೆ ಕ್ಷೇತ್ರ ಪ್ರವಾಸದಲ್ಲಿ ಇಂದು ಮಂಗಳೂರ ಗ್ರಾಮದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಜನರ ಅಹವಾಲು ಕೇಳಿದೆ.
Reply Retweet Σήμανση "Μου αρέσει"
Siddaramaiah 8 Ιουν
ಸದ್ಯದಲ್ಲಿಯೇ ಬಾದಾಮಿಯಲ್ಲಿ ಮನೆ ಮಾಡುತ್ತೇನೆ ಹಾಗೂ ಶಾಸಕರ ಕಚೇರಿಯನ್ನೂ ತೆರೆಯುತ್ತೇನೆ. ತಿಂಗಳಲ್ಲಿ ಎರಡು ಬಾರಿ ಬಾದಾಮಿಗೆ ಬಂದು ಸಾರ್ವಜನಿಕರ ಅಹವಾಲು ಆಲಿಸುತ್ತೇನೆ.
Reply Retweet Σήμανση "Μου αρέσει"
Siddaramaiah 8 Ιουν
ಬಾದಾಮಿ ವಿಧಾನಸಭೆ ಕ್ಷೇತ್ರ ಪ್ರವಾಸದ ಸಂದರ್ಭದಲ್ಲಿ ಅಡಗಲ್ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದೆ. ಜನರ ಪ್ರತಿಕ್ರಿಯೆ‌ಯಿಂದ ಮನಸ್ಸು ತುಂಬಿಬಂತು.
Reply Retweet Σήμανση "Μου αρέσει"
Siddaramaiah 8 Ιουν
ರೈತನ ಮಗನಾದ ನಾನು ರೈತರ ಕಷ್ಟಗಳನ್ನು ಕಂಡುಂಡು ಬೆಳೆದವನು. ಕಷ್ಟಜೀವಿಗಳಾದ ರೈತರು ಧೈರ್ಯಶಾಲಿಗಳು. ನಾನು ಸದಾ ರೈತರ ಜತೆಯಲ್ಲಿರುತ್ತೇನೆ ಎಂದು ರೈತ ಕುಟುಂಬಕ್ಕೆ‌ ತಿಳಿಸಿದೆ. ನುಡಿದಂತೆ‌ ನಡೆದಿದ್ದೇನೆ, ಮುಂದೆಯೂ ನಡೆಯುತ್ತೇನೆ.
Reply Retweet Σήμανση "Μου αρέσει"
Siddaramaiah 7 Ιουν
ಚಾಮುಂಡೇಶ್ವರಿ ಕ್ಷೇತ್ರದಂತೆ ಇಲ್ಲಿಯೂ ನನ್ನನ್ನು ಸೋಲಿಸಲು ಭಾರಿ ಷಡ್ಯಂತ್ರವೇ ನಡೆಯಿತು. ಆದರೆ ಬಾದಾಮಿ ಕ್ಷೇತ್ರದ ಜನ ಅದನ್ನು ಧಿಕ್ಕರಿಸಿ ನನ್ನ ಕೈ ಹಿಡಿದಿದ್ದಾರೆ. ಇದಕ್ಕೆ ನಾನು ಜೀವನಪರ್ಯಂತ ಋಣಿಯಾಗಿರುತ್ತೇನೆ.
Reply Retweet Σήμανση "Μου αρέσει"
Siddaramaiah 7 Ιουν
ನಾನು ದೂರದ ಊರಿನವನಾದರೂ ಇನ್ನು‌ ಮುಂದೆ ಬಾದಾಮಿ‌ ಕ್ಷೇತ್ರ‌ಕ್ಕೆ ಸೇರಿದವನು. ಚುನಾವಣೆಯಲ್ಲಿ ‌ಬಾದಾಮಿಯ ಜನತೆ ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ಅವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು.
Reply Retweet Σήμανση "Μου αρέσει"
Siddaramaiah 7 Ιουν
ಮೃತ ರೈತನ ಪತ್ನಿಗೆ ಮಾಸಾಶನ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಶೀಘ್ರವಾಗಿ ದೊರಕಿಸಿಕೊಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಕುಟುಂಬದ ಜತೆ ನಾನು ಸದಾ ಇರುತ್ತೇನೆ.
Reply Retweet Σήμανση "Μου αρέσει"
Siddaramaiah 7 Ιουν
ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಬಾದಾಮಿ ವಿಧಾನಸಭೆ ಕ್ಷೇತ್ರದ ರೈತ ರಾಜಪ್ಪ ಜಲಗೇರಿ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದೆ. ಸರ್ಕಾರದ ವತಿಯಿಂದ ರೂ.5 ಲಕ್ಷ ಹಾಗೂ ವೈಯುಕ್ತಿಕವಾಗಿ ರೂ.1 ಲಕ್ಷದ ಚೆಕ್ ಅನ್ನು ಮೃತ ರೈತನ ಕುಟುಂಬದವರಿಗೆ ನೀಡಿದ್ದೇನೆ.
Reply Retweet Σήμανση "Μου αρέσει"
Siddaramaiah 7 Ιουν
ಶಾಸಕನಾಗಿ ಆಯ್ಕೆಯಾದ ಬಳಿಕ ಇಂದು ಮೊದಲ ಬಾರಿಗೆ ಬಾದಾಮಿಗೆ ಭೇಟಿ ನೀಡಿ, ಬನಶಂಕರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದೆ. ಇಂದಿನಿಂದ ಐದು ದಿನಗಳ ಕ್ಷೇತ್ರ ಪ್ರವಾಸವನ್ನು ಆರಂಭಿಸಿದ್ದೇನೆ.
Reply Retweet Σήμανση "Μου αρέσει"
Siddaramaiah 6 Ιουν
ಇಂದು ಪ್ರಮಾಣವಚನ ಸ್ವೀಕರಿಸಿದ ಕಾಂಗ್ರೆಸ್‌ ಮತ್ತು ಜೆಡಿ (ಎಸ್) ಪಕ್ಷದ ನೂತನ ಸಚಿವರಿಗೆ‌ ಹಾರ್ದಿಕ ಅಭಿನಂದನೆಗಳು. ಜನಸೇವೆಗೆ ಕಟಿಬದ್ಧರಾಗಿರುವ ಸಚಿವರಿಗೆ ಎಲ್ಲ‌ ಬಗೆಯ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
Reply Retweet Σήμανση "Μου αρέσει"
Siddaramaiah 6 Ιουν
ಇಂದು ಮಾಜಿ ಮುಖ್ಯಮಂತ್ರಿ ಮತ್ತು ಸಾಮಾಜಿಕ‌ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಅವರ ೩೬ನೇ ಪುಣ್ಯ ಸ್ಮರಣೆಯ ದಿನ. ಅವರ ಚಿಂತನೆ ಮತ್ತು ಸಾಧನೆ ನಮಗೆಲ್ಲ ಪ್ರೇರಣೆ. ಸಾಮಾಜಿಕ ನ್ಯಾಯದ ಬಂಡಿಯನ್ನು ನಿಲ್ಲಿಸದೆ ಮುಂದಕ್ಕೆ ಎಳೆದೊಯ್ಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಅದಕ್ಕೆ ನಾನು ಸದಾ ಬದ್ಧ. ಅವರಿಗೆ ನಿಷ್ಠಾಪೂರ್ವಕ ನಮನಗಳು.
Reply Retweet Σήμανση "Μου αρέσει"
Siddaramaiah 5 Ιουν
ನಮ್ಮ ಸುತ್ತಲಿನ ಪರಿಸರ ನಮ್ಮ ಸಂಪಾದನೆಯಲ್ಲ, ಅದು ನಮಗೆ ಹಿರಿಯರು ನೀಡಿದ ಉಡುಗೊರೆ. ಅದನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮ ಕರ್ತವ್ಯ. ಇದರಲ್ಲಿ ವಿಫಲವಾದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸುವುದಿಲ್ಲ. ಪರಿಸರದ ರಕ್ಷಣೆಯಲ್ಲಿಯೇ ನಮ್ಮ ರಕ್ಷಣೆ ಇದೆ. ಪರಿಸರ ದಿನದ ಶುಭಾಶಯಗಳು.
Reply Retweet Σήμανση "Μου αρέσει"
Siddaramaiah 1 Ιουν
ಖಾತೆಗಳ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ ಎಂಬ ಅಭಿಪ್ರಾಯ ಸರಿಯಲ್ಲ. ಎರಡೂ ಪಕ್ಷಗಳ ನಾಯಕರು ಪರಸ್ಪರ ಸಮಾಲೋಚನೆ ನಡೆಸಿಯೇ ತೀರ್ಮಾನ ಕೈಗೊಂಡಿದ್ದೇವೆ. ಮಂತ್ರಿ ಸ್ಥಾನ ಸಿಗದವರು ಬಂಡಾಯ‌ ಏಳಲಿದ್ದಾರೆ ಎಂಬುದು ಊಹಾಪೋಹ.
Reply Retweet Σήμανση "Μου αρέσει"
Siddaramaiah 1 Ιουν
ಪ್ರತಿ ತಿಂಗಳು ಒಂದು ಅಥವಾ ಎರಡು ಬಾರಿ ಸಮನ್ವಯ ಸಮಿತಿ ಸಭೆ ಸೇರಿ ಸರ್ಕಾರ ಕೈಗೊಳ್ಳಬೇಕಾದ ಪ್ರಮುಖ ತೀರ್ಮಾನಗಳ ಬಗ್ಗೆ ಚರ್ಚಿಸಲಾಗುವುದು. ಕಾಂಗ್ರೆಸ್ ಹಾಗೂ ಜೆಡಿಎಸ್ ನ ಚುನಾವಣಾ ಪ್ರಣಾಳಿಕೆಗಳ ಬಗ್ಗೆ ಚರ್ಚೆ ಮಾಡಿ ರಾಜ್ಯದ ಹಿತದೃಷ್ಟಿಯಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.
Reply Retweet Σήμανση "Μου αρέσει"
Siddaramaiah 1 Ιουν
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷನಾಗಿ ನನ್ನನ್ನು ನೇಮಿಸಿರುವ ಹೈಕಮಾಂಡ್ ನಾಯಕರಿಗೆ ಕೃತಜ್ಞತೆಗಳು. ಎರಡೂ ಪಕ್ಷಗಳು ಹೊಂದಾಣಿಕೆಯಿಂದ ಆಡಳಿತ ನಡೆಸಲು ಸಹಕಾರಿಯಾಗುವ ವಾತಾವರಣ ನಿರ್ಮಾಣ‌ಕ್ಕೆ ನಾನು ಪ್ರಯತ್ನಿಸುತ್ತೇನೆ ಎಂದು ರಾಜ್ಯದ ಜನತೆಗೆ ಭರವಸೆ ನೀಡುತ್ತೇನೆ.
Reply Retweet Σήμανση "Μου αρέσει"
Siddaramaiah 1 Ιουν
ರಾಜಕೀಯ ದ್ವೇಷ ಸಾಧನೆಗೆ ನರೇಂದ್ರ ಮೋದಿ ಸರ್ಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿರುವುದು‌ ಖಂಡನೀಯ. ಇಂತಹ ಬೆದರಿಕೆಗೆ ಕಾಂಗ್ರೆಸ್ ನಾಯಕರು ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ. ಡಿ.ಕೆ.ಶಿವಕುಮಾರ್ ಒಬ್ಬಂಟಿಯಲ್ಲ, ಕಾಂಗ್ರೆಸ್ ಪಕ್ಷ ಜತೆಗಿದೆ.
Reply Retweet Σήμανση "Μου αρέσει"